ಉಪ-ಕೇಂದ್ರಕ್ಕೆ ಮರುಚಾಲನೆ.*

 *ಆರೋಗ್ಯ ಸಹಾಯಕರ  ಉಪ-ಕೇಂದ್ರಕ್ಕೆ ಮರುಚಾಲನೆ.*


ಕೇಂದ್ರ ಸರ್ಕಾರದ ನಿರೀಕ್ಷಿತ ಯೋಜನೆಯಾದ ಆಯುಷ್ಮಾನ ಭಾರತ ಯೋಜನೆಯಡಿಯಲ್ಲಿ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ   ಆರೋಗ್ಯ ಸಹಾಯಕರ  ಉಪ-ಕೇಂದ್ರಕ್ಕೆ ಮರುಚಾಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾದ ಶಿವಾನಂದ ಅರಭಾವಿ ಮಾತನಾಡಿ, ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಜನತೆಯ ಆರೋಗ್ಯದ ದೃಷ್ಟಿಯಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಗ್ರಾಮದ ಪ್ರತಿಯೊಬ್ಬರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದುಹೇಳಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿಂದ್ರ ದಶವಂತ, ಗ್ರಾ.ಪಂ ಅಧ್ಯಕ್ಷ ಭರಮಪ್ಪಾ ಹುಚ್ಚನ್ನವರ್, ಉಪಾಧ್ಯಕ್ಷ ಕೆಂಪಣ್ಣ ಹಾವಪ್ಪಗೋಳ, ಸದಸ್ಯರಾದ ವಿಜಯ್ ಮೋಟನವರ ಹಾಗೂ ಸಾರ್ವಜನಿಕರು ಇದ್ದರು.





Comments