Breaking News

 ಬಾಂದಾರ ಬಾಗಿಲು ಕದಿಯುತ್ತಿದ್ದ  ಕಳ್ಳರು    : ಓರ್ವ‌ ಸೆರೆ.


ಬಾಂದಾರ ಬಾಗಿಲು ಕದಿಯುತ್ತಿದ್ದ ಕಳ್ಳರನ್ನು ಗ್ರಾಮಸ್ಥರು ಸೆರೆ ಹಿಡಿದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿವನೂರ ಗ್ರಾಮದಲ್ಲಿ ನಡೆದಿದೆ. ಕಳೆದೆರಡು ವರ್ಷಗಳಿಂದ ಹಳ್ಳದ ಬಾಂದಾರ ಬಾಗಿಲುಗಳನ್ನು ಕದಿಯುತ್ತಿದ್ದರು ಎನ್ನಲಾಗ್ತಿದೆ. 9 ಜನ ಕಳ್ಳರ ಪೈಕಿ ಓರ್ವನನ್ನು ಗ್ರಾಮಸ್ಥರು ಸೆರೆಹಿಡಿದಿದ್ದಾರೆ. ಕಳ್ಳರು ಮಹಾರಾಷ್ಟ್ರ ಮೂಲದವರೆಂದು ಹೇಳಲಾಗ್ತಿದೆ. ಬಾಂ ಕಿದಾರು ಬಾಗಿಲುಗಳ ಜೊತೆಗೆ ಒಂದು ಗೂಡ್ಸ್ ವಾಹನ ವಶಕ್ಕೆ ಪಡೆದ ಗ್ರಾಮಸ್ಥರು ಕಳ್ಳರಿಗೆ ಧರ್ಮದೇಟು ನೀಡಿ ಅಥಣಿ ಪೊಲೀಸರಿಗೆ ಒಪ್ಪಿಸಿದ್ದಾರೆ.


Comments