ಶಿರಗಾವ ಗ್ರಾಮದಲ್ಲಿ ಯುವಕನ ಕೊಚ್ಚಿ ಕೊಲೆ..

ಶಿರಗಾವ: ಚಿಕ್ಕೋಡಿ ತಾಲೂಕಿನ  ಶಿರಗಾವ ಗ್ರಾಮದಲ್ಲಿ  ಹಳೆ ವೈಷಮ್ಯದ ಹಿನ್ನೆಲೆ  ವ್ಯಕ್ತಿಯೋರ್ವನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಿರಗಾವ ಗ್ರಾಮದಲ್ಲಿ ನಡೆದಿದೆ. ಸಂತೋಷ ಅಪ್ಪಾಸಾಬ್ ತೇಲಿ (43) ಕೊಲೆಯಾದ ವ್ಯಕ್ತಿ. ಭೀಮಾ ಮಹಾದೇವ ಮಗದುಮ್ಮ(30) ಕೊಲೆ ಮಾಡಿದವ ಎನ್ನಲಾಗ್ತಿದೆ. ನಿನ್ನೆ  ರಾತ್ರಿ 9:30ಕ್ಕೆ ಗ್ರಾಮದ ಸಮೀಪದ ಬೆಳಗಾವಿ ವೈನ್ಸ್ ಹತ್ತಿರ ಕೊಚ್ಚಿ ಕೊಲೆ. ಚಾಕುವಿನಿಂದ ಕುತ್ತಿಗೆ ಹಾಗೂ ಎದೆ ಭಾಗದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಲಾಗಿದೆ. ಕುಡಿದ ಅಮಲಿನಲ್ಲಿ ಕೃತ್ಯ ಎಸಗಲಾಗಿದೆ. ಕೊಲೆಯಾದ ಬಳಿಕ ಖಡಕಲಾಟ ಪೊಲೀಸರಿಗೆ ಭೀಮಾ ಮಗದುಮ್ಮ ಶರಣಾಗಿದ್ದಾನೆ. ಈ ಕುರಿತಂತೆ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments