ಚಿಕ್ಕೋಡಿ: ಶಾಸಕ ಗಣೇಶ್ ಹುಕ್ಕೇರಿ ಪಾದಯಾತ್ರೆ

 ಚಿಕ್ಕೋಡಿ: ಶಾಸಕ ಗಣೇಶ್ ಹುಕ್ಕೇರಿ ಪಾದಯಾತ್ರೆ.

             ಚಿಕ್ಕೋಡಿ- ಸದಲಗಾ ಶಾಸಕರಾದ ಶ್ರೀ ಗಣೇಶ್ ಹುಕ್ಕೇರಿ ಯವರು ಇಂದು ಬೆಳಿಗ್ಗೆ ಹನುಮ ಮಾಲಾ ದಾರಿಗಳ ಹಾಗೂ ಹನುಮ ಭಕ್ತರ ದಂಡಿನೊಂಡಿಗೆ ಮತ್ತು  ತಮ್ಮ ಅಭಿಮಾನಿ ಬಳಗ ಮತ್ತು  ಸಾವಿರಾರು ಸಂಖ್ಯೆಯ ಭಕ್ತ ಸಮೂಹದೊಂದಿಗೆ ಹನುಮ ಜಯಂತಿ ನಿಮಿತ್ತ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.  ದಾರಿಯುದ್ದಕ್ಕೂ 'ಜೈ ಶ್ರೀರಾಮ್ ' ಘೋಷಣೆ ಕೂಗುತ್ತ ಭಕ್ತರು ಹರ್ಶೋಲ್ಲಾಸದಲ್ಲಿ  ಮುನ್ನಡೆಯುತ್ತಿದ್ದರು.ಬೆಳಿಗ್ಗೆ ಸುಮಾರು 6 ಗಂಟೆಗೆ  ಚಿಕ್ಕೋಡಿಯ ಬಸವ ವೃತ್ತದಿಂದ ಪ್ರಾರಂಭವಾದ ಯಾತ್ರೆ 8 ಘಂಟೆಗೆ ಹೊತ್ತಿಗೆ ತೊರನಹಳ್ಳಿ ಗ್ರಾಮದ  ದೇವಸ್ಥಾನ ತಲುಪಿ ಪೂಜೆ ಪುನಸ್ಕಾರ ಮುಗಿಸಿ, ನಂತರ ಬಂದಂತಹ ಯಲ್ಲಾ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ನೆರೆದಿದ್ದ ಎಲ್ಲಾ ಭಕ್ತಾದಿಗಳು ಪ್ರಸಾದ ಸ್ವೀಕರಿಸಿ ಪಾವನ ರಾದರು.




Comments