ಚಿಂಚನಿಯಲ್ಲಿ ಅದ್ಧೂರಿ ಡಾ! ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ.

ಚಿಂಚನಿಯಲ್ಲಿ ಅದ್ಧೂರಿ ಡಾ! ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಆಚರಣೆ.
          ಚಿಕ್ಕೋಡಿ ತಾಲೂಕಿನ ಚಿಂಚನಿ ಗ್ರಾಮದಲ್ಲಿ ಅನೇಕ ಕಡೆ ಇಂದು ಮಹಾಮಾನವತಾವಾದಿ ಡಾ!ಬಿ ಆರ್ ಅಂಬೇಡ್ಕರ್ ಅವರ ಜಯಂತಿ ಯನ್ನು ಅದ್ಧೂರಿಯಾಗಿ ಆಚರಸಲಾಯಿತು.ನಗರದ   ಅಂಬೇಡ್ಕರ್ ಕಾಲೊನಿ ಯಿಂದ ಪ್ರಾರಂಭವಾದ ಮೆರವಣಿಗೆ ಬಸ್ ನಿಲ್ದಾಣದ ಮಾರ್ಗವಾಗಿ  ಬಂದು ಅಲ್ಲಿಂದ ಊರ ಸುತ್ತು ಹಾಕಿ ನಂತರ  ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮುಕ್ತಾಯ ಕಂಡಿತು. ದಾರಿಯುದ್ದಕ್ಕೂ ದ್ವನಿವರ್ದಕಗಳ ಮೂಲಕ ಸಿನೆಮಾ ಹಾಡುಗಳನ್ನು ಹಾಕಿ ಪಡ್ಡೆ ಹುಡುಗರು ನೃತ್ಯ ಮಾಡುವ ದೃಶ್ಯ ಅಲ್ಲಲ್ಲಿ ಕಂಡು ಬರ್ತಾ ಇತ್ತು.

              ಅದೇ ರೀತಿ ನಗರದಲ್ಲಿ ಜಗತ್ತಿಗೆ ಶಾಂತಿ ಮಂತ್ರ ಪಠಿಸಿದ  ಶಾಂತಿದೂತ ಭಗವಾನ್ ಮಹಾವೀರ ತೀರ್ಥಂಕರರ  ಜಯಂತಿ ಕೂಡ ಅತಿ ವಿಜೃಂಭಣೆಯಿಂದ ಶಾಂತ ರೀತಿಯಿಂದ ಆಚರಣೆ ಮಾಡಲಾಗಿತ್ತು.

Comments